For the best experience, open
https://m.navayuganews.com
on your mobile browser.
Advertisement

ಮೈಸೂರು: ಆಹಾರ ಅರಸಿ ನಾಡಿಗೆ ಬರಲು ಪ್ರಯತ್ನಿಸಿದ ಆನೆ ಕಂದಕಕ್ಕೆ ಬಿದ್ದು ಮೃತಪಟ್ಟ ಘಟನೆ ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

Advertisement

ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ಆನೆಗಳ ಹಾವಳಿಗೆ ತಡೆ ನೀಡಲು ನಿರ್ಮಿಸಿರುವ ಆನೆ ಕಂದಕಕ್ಕೆ ಬಿದ್ದು ಈ ನತದೃಷ್ಟ ಆನೆ ಮೃತಪಟ್ಟಿದೆ.

ಕಂದಕದಲ್ಲಿ ಬಿದ್ದು ನರಳುತ್ತಿದ್ದ ಆನೆಯನ್ನು ಗಮನಿಸಿ ಸ್ಥಳೀಯರು ಓಂಕಾರ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅರಣ್ಯಾ ಧಿಕಾರಿಗಳು ಬರುವಷ್ಟರಲ್ಲಿ ಪಾಪದ ಆನೆ
ಮೃತಪಟ್ಟಿತ್ತು.

ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿ ಎ ಸಿ ಎಫ್ ಪ್ರಭಾಕರ್, ಆರ್ ಎಫ್ ಒ ನಿತಿನ್ ಕುಮಾರ್ ಹಾಗೂ ಓಂಕಾರ ಅರಣ್ಯ ಇಲಾಖೆಯ ವೈಲ್ಡ್ ಲೈಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಜೆಸಿಬಿ ಮೂಲಕ ಮೃತ ಆನೆಯನ್ನು ಮೇಲಕ್ಕೆ ಎತ್ತಿ ಮುಂದಿನ ಕ್ರಮ ಕೈಗೊಂಡರು.

Advertisement
Tags :
Advertisement