ಸೀಮಾ ಲಾಟ್ಕರ್ ಗೆ ತೇಜಸ್ವಿ ಅಭಿನಂದನೆ
07:18 PM Oct 12, 2024 IST
|
ಅಮೃತ ಮೈಸೂರು
Advertisement
ಮೈಸೂರು: ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಯಶಸ್ವಿ ದಸರಾ ನಡೆಸಿಕೊಟ್ಟ ಮೈಸೂರಿನ ಪ್ರಥಮ ಮಹಿಳಾ ಕಮೀಷನರ್ ಸೀಮಾ ಲಾಟ್ಕರ್ ರವರಿಗೆ ಕನ್ನಡ ಚಳವಳಿ ಹೋರಾಟಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
Advertisement
ಸೀಮಾ ಲಾಟ್ಕರ್ ಅವರು 2024 ರ ಮೈಸೂರು ದಸರಾ ಮಹೋತ್ಸವದಲ್ಲಿ ಯಾವುದೇ ಕ್ಷಣದಲ್ಲೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಯಶಸ್ವಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮ ವಹಿಸಿ ಭದ್ರತೆ ಒದಗಿಸಿದ್ದಾರೆ.
ಮೈಸೂರು ದಸರಾ ಮಹೋತ್ಸವದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ ಮತ್ತು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಿ ವ್ಯವಸ್ಥಿತವಾಗಿ ಭದ್ರತೆ ಒದಗಿಸುವಲ್ಲಿ ಸೀಮಾ ಲಾಟ್ಕರ್ ಮತ್ತು ಪೋಲಿಸ್ ಸಿಬ್ಬಂದಿ ಶ್ರಮವಹಿಸಿ ಯಶಸ್ವಿಯಾಗಿ ದಸಾರ ನಡೆಸಿದ್ದು ಹೆಮ್ಮೆಯ ಸಂಗತಿ ಎಂದು ತೇಜಸ್ವಿ ಶ್ಲಾಘಿಸಿದ್ದಾರೆ.
Advertisement
Next Article