For the best experience, open
https://m.navayuganews.com
on your mobile browser.
Advertisement

ಮೈಸೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 74ನೇ ಹುಟ್ಟು ಹಬ್ಬದ ಪ್ರಯುಕ್ತ ಪಾತಿ ಫಿಲಂಸ್ ವತಿಯಿಂದ ಎಂದಿಗೂ ನಿಲ್ಲದು ಸಿಂಹ ಘರ್ಜನೆ ಹಾಡನ್ನು ಹೊರತಂದಿದ್ದು,ಸಂಸದ ಯದುವೀರ್ ಒಡೆಯರ್ ಬಿಡುಗಡೆಗೊಳಿಸಿದರು.

Advertisement

ಈ ವೇಳೆ ಯದುವೀರ್ ಮಾತನಾಡಿ, ವಿಷ್ಣುವರ್ಧನ್ ರವರು ನಮ್ಮ ಮೈಸೂರಿನವರು ಅವರ ಚಿತ್ರಗಳೆಲ್ಲವೂ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದವು ಎಂದು ಸ್ಮರಿಸಿದರು.

ವಿಷ್ಣುವರ್ಧನ್ ನೆನಪಿನಲ್ಲಿ ಯುವಕಲಾವಿದರ ಪ್ರತಿಭೆಗೆ ಅವಕಾಶ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವ ಪಾತಿ ಫಿಲಂಸ್ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಾತಿ ಫಿಲಂಸ್ ಎಂ.ಡಿ ಪಾರ್ಥಸಾರಥಿ, ನಿರ್ದೇಶಕ ಎಸ್.ಜೆ ಸಂಜಯ್, ಗಾಯಕ ವೈಶಾಖ ಶಶಿಧರ್, ಮಧಾನ್, ಅಜಯ್ ಶಾಸ್ತ್ರೀ, ಯೋಗ ನರಸಿಂಹ ಕೆ ಆರ್ (ಮುರಳಿ),ಟಿ.ಎಸ್ ಅರುಣ್,ಸುಚೇಂದ್ರ, ಚಕ್ರಪಾಣಿ, ಸಂತೋಷ್, ಮಹೇಂದ್ರ ಹಾಗೂ ವಿಷ್ಣು ಅಭಿಮಾನಿಗಳು ಉಪಸ್ಥಿತರಿದ್ದರು.

Advertisement
Tags :
Advertisement