ಬಸ್ ಹರಿದು ವೃದ್ಧ ದುರ್ಮರಣ
02:03 PM Aug 11, 2024 IST
|
ಅಮೃತ ಮೈಸೂರು
Advertisement
ಹುಣಸೂರು,ಆ.11: ರಸ್ತೆ ದಾಟುತ್ತಿದ್ದ ವೃದ್ದನ ಮೇಲೆ ಕೆಎಸ್ ಆರ್ ಟಿಸಿ ಬಸ್ ಹರಿದು ಆತ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.
Advertisement
ಮೈಸೂರು ಹುಣಸೂರು ಮುಖ್ಯ ರಸ್ತೆಯ ಬನ್ನಿಕುಪ್ಪೆ ಬಳಿ ಈ ಘಟನೆ ನಡೆದಿದ್ದು,ತಮಿಳುನಾಡು ಮೂಲದ ದೊರೆಸ್ವಾಮಿ(67) ಮೃತಪಟ್ಟಿದ್ದಾರೆ.
ಮಗಳ ಮನೆಗೆ ಬಂದಿದ್ದ ದೊರೆಸ್ವಾಮಿ ಟೀ ಕುಡಿಯಲು ರಸ್ತೆ ದಾಟುತ್ತಿದ್ದಾಗ ಬಸ್ ಢಿಕ್ಕಿ ಹೊಡೆದಿದೆ.
ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡರು.
Advertisement
Next Article