HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಸಿಂಘ್ವಿ ಆಸನದಲ್ಲಿ ನೋಟಿನ ಕಂತೆ; ತನಿಖೆಗೆ ಧನಕರ್ ಆದೇಶ

07:54 PM Dec 06, 2024 IST | ಅಮೃತ ಮೈಸೂರು
Advertisement

ನವದೆಹಲಿ: ಚಳಿಗಾಲದ ಅಧಿವೇಶನದ ಆರಂಭದಲ್ಲೇ ಹಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ,ಇದೀಗ ಕಾಂಗ್ರೆಸ್ ಸಂಸದನ ಆಸನದಲ್ಲಿ ಕಂತೆ,ಕಂತೆ ಹಣ ಪತ್ತೆಯಾಗಿದ್ದು ಭಾರಿ ಚರ್ಚೆಗೆ ಗ್ರಾಸ ಒದಗಿಸಿದೆ.

Advertisement

ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಮೀಸಲಾಗಿದ್ದ ಆಸನದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಹೇಳಿದ್ದಾರೆ.

ಗುರುವಾರ ಸದನವನ್ನು ಮುಂದೂಡಿದ ಬಳಿಕ ಪರಿಶೀಲನೆ ವೇಳೆ ಆಸನ ಸಂಖ್ಯೆ 222ರಲ್ಲಿ ಭದ್ರತಾ ಸಿಬ್ಬಂದಿ ಕಂತೆ ಕಂತೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸದನಕ್ಕೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ನೋಟುಗಳು ನಕಲಿಯೋ ಅಥವಾ ಅಸಲಿಯೋ ಎಂಬುದು ತಿಳಿದು ಬಂದಿಲ್ಲ, ಸದನದ ಶಿಷ್ಟಾಚಾರದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಜಗದೀಪ್ ಧನಕರ್ ತಿಳಿಸಿದ್ದಾರೆ.

ಯಾರಾದರೂ ಕರೆನ್ಸಿ ನೋಟುಗಳು ತಮ್ಮದು ಎಂದು ಕೇಳುತ್ತಾರೇನೊ ಎಂದು ನಾನು ನಿರೀಕ್ಷಿಸುತ್ತಿದ್ದೆ. ಆದರೆ ಯಾರೂ ಅದನ್ನು ಇಲ್ಲಿಯವರೆಗೆ ತಮ್ಮದೆಂದು ಒಪ್ಪಿಕೊಂಡಿಲ್ಲ ಎಂದು ಹೇಳಿದರು.

ಈ‌ ವೇಳೆ ಸಂಸದ ಮನು ಸಿಂಘ್ವಿ ಮಾತನಾಡಿ,ಇದನ್ನು ಕೇಳಿ ನನಗೂ ಅಚ್ಚರಿಯಾಯಿತು ನಾನು ನಿನ್ನೆ ಮಧ್ಯಾಹ್ನ 12.57 ಕ್ಕೆ ಸದನದ ಒಳಗೆ ಪ್ರವೇಶ ಮಾಡಿದೆ. 1 ಗಂಟೆಗೆ ಸದನ ಆರಂಭವಾಯಿತು. ಮಧ್ಯಾಹ್ನ 1 ರಿಂದ 1.30 ರವರೆಗೆ ನಾನು ಅಯೋಧ್ಯಾ ಪ್ರಸಾದ್ ಅವರೊಂದಿಗೆ ಕುಳಿತುಕೊಂಡೆ, 1:30 ಕ್ಕೆ ನಾನು ಸಂಸತ್ತನ್ನು ಬಿಟ್ಟೆ, ನಾನು ಸದನದಲ್ಲಿ ಒಟ್ಟು 3 ನಿಮಿಷಗಳು ಮತ್ತು ಕ್ಯಾಂಟೀನ್‌ನಲ್ಲಿ ನನ್ನ ವಾಸ್ತವ್ಯ 30 ನಿಮಿಷಗಳು ಮಾತ್ರ ಇತ್ತು. ಅಂತಹ ವಿಷಯಗಳಲ್ಲಿಯೂ ರಾಜಕೀಯ ಮಾಡಲಾಗುತ್ತಿದೆ ಎಂದು ದೂರಿದರು.

ಆ ಹಣ ನನ್ನದಲ್ಲ, ಖಂಡಿತ ಬೇರೆ ಯಾರೊ ಅದನ್ನು ತಂದು ನನ್ನ ಆಸನದ ಬಳಿ ಇಟ್ಟು ಹೋಗಿರಬಹುದು ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದು ಒತ್ತಾಯಿಸಿದರು.

ತನಿಖೆ ಪೂರ್ಣಗೊಳ್ಳದೆ ಸಭಾಪತಿಯವರು ಸದಸ್ಯರ ಹೆಸರು ಹೇಳಬಾರದಿತ್ತು ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Advertisement
Tags :
Manu SinghviMoneyNavadehaliSamsat
Advertisement
Next Article