HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

4 ಗಾರ್ಡ್ ವಾಚರ್ ಗಳಿಗೆ ತಲಾ 1ಲಕ್ಷ ನೀಡಿ ಗೌರವಿಸಿದ ಸೈಕಲ್ ಪ್ಯೂರ್ ಅಗರಬತ್ತಿ

07:11 PM Sep 22, 2024 IST | ಅಮೃತ ಮೈಸೂರು
Advertisement

ಬೆಂಗಳೂರು: ಅರಣ್ಯ ಸಂರಕ್ಷಣೆಯಲ್ಲಿ ಅಪ್ರತಿಮ ಕೆಲಸ ಮಾಡಿದ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ನಾಲ್ವರು ಗಾರ್ಡ್ ವಾಚರ್ ಗಳಿಗೆ ನಾಲ್ಕು ಲಕ್ಷ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

Advertisement

ಭಾರತದ ಹೆಸರಾಂತ ಸೈಕಲ್ ಪ್ಯೂರ್ ಅಗರಬತ್ತಿ ಪ್ರತೀ ವರ್ಷ ಅರಣ್ಯ ಸಂರಕ್ಷರಿಗೆ ಗೌರವ ಸಲ್ಲಿಸುವ ಮಹತ್ವದ ಕಾರ್ಯ ಮಾಡುತ್ತಿದೆ.

ಅದರಂತೆ ಈ‌ ವರ್ಷ ಕೂಡಾ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 12ನೇ ವಾರ್ಷಿಕ ವನ್ಯಜೀವಿ ಸೇವಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ನಾಲ್ವರು ಅರಣ್ಯ ಸಂರಕ್ಷಕರಿಗೆ ಗೌರವ ಪುರಸ್ಕಾರ ಸಲ್ಲಿಸಿತು.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವಾಚರ್ ವೆಂಕಟೇಶ್ (ಕರ್ನಾಟಕ), ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗಾರ್ಡ್ ರಾಘವೇಂದ್ರ ಗೌಡ (ಕರ್ನಾಟಕ), ಕೊಯಮತ್ತೂರು ವನ್ಯಜೀವಿ ಸಂರಕ್ಷಣಾ ವಿಭಾಗದ ಗಾರ್ಡ್ ಎ ಅರುಣ್ ಕುಮಾರ್ (ತಮಿಳುನಾಡು) ಮತ್ತು ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ವಾಚರ್ ಸಾಬು ಜಾರ್ಜ್ ( ಕೇರಳ) ಅವರುಗಳಿಗೆ ತಲಾ‌ 1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ವನ್ಯಜೀವಿ ಸಂರಕ್ಷಣಾ ವಿಷಯದಲ್ಲಿ ತೋರಿರುವ ಅಪ್ರತಿಮ ಬದ್ಧತೆ, ವಿಶೇಷವಾಗಿ ದಕ್ಷಿಣ ಭಾರತದ ಕಾಡುಗಳಲ್ಲಿ ಆನೆಗಳ ಸಂರಕ್ಷಣೆ ವಿಚಾರದಲ್ಲಿ ಮಹತ್ತರ ಕೆಲಸ ಮಾಡಿರುವ ಕರ್ನಾಟಕದ ಸುಧೀರ್ ಶೆಟ್ಟಿ ಮತ್ತ ಕೇರಳದ ಎಂ ಎನ್ ಜಯಚಂದ್ರನ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಕ್ರಿಕೆಟಿಗರಿಂದ ಸಂರಕ್ಷಣಾ ಕಾರ್ಯ ಎಂಬ ಮಹತ್ತರ ಯೋಜನೆಯ ಭಾಗವಾಗಿ ನಡೆದ ಕೆಎಸ್‌ಸಿಎ ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿಯು ಬೆಂಗಳೂರಿನಲ್ಲಿ ಏಪ್ರಿಲ್ 22 ರಿಂದ ಮೇ 13ರವರೆಗೆ ನಡೆದಿತ್ತು.

ಕ್ರಿಕೆಟಿಗರಿಂದ ಸಂರಕ್ಷಣಾ ಕಾರ್ಯ ಎಂಬ ಯೋಜನೆಯನ್ನು ಭಾರತದ ಕ್ರಿಕೆಟ್ ದಂತಕಥೆಗಳಾದ ಸಂದೀಪ್ ಪಾಟೀಲ್, ಯೂಸುಫ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಅವರು ಸ್ಥಾಪಿಸಿರುವ ಪಬ್ಲಿಕ್ ಟ್ರಸ್ಟ್ ಸಂಸ್ಥೆಯು ಹಮ್ಮಿಕೊಂಡಿದೆ.

ಈ ಸಂಸ್ಥೆ ಭಾರತದ ವನ್ಯಜೀವಿ ಸಂರಕ್ಷಣಾ ಕೆಲಸದಲ್ಲಿ ಶ್ರದ್ಧಾಪೂರ್ವಕವಾಗಿ ತೊಡಗಿಸಿಕೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಜಿ.ಆರ್.ವಿಶ್ವನಾಥ್ ಮತ್ತು ಎನ್.ರಂಗರಾವ್ ಆಂಡ್ ಸನ್ಸ್ ನಿರ್ದೇಶಕ ಶ್ರೀ ಕಿರಣ್ ರಂಗಾ ಅರಣ್ಯ ಸಂರಕ್ಷಕರನ್ನು ಗೌರವಿಸಿದರು.

ಈ ವೇಳೆ ಮಾತನಾಡಿದ ಜಿ.ಆರ್.ವಿಶ್ವನಾಥ್ ಅವರು, ನಾಡಿನ ಶ್ರೀಮಂತ ಜೀವವೈಧ್ಯತೆಯನ್ನು ರಕ್ಷಿಸಲು ಅವರ ಶ್ರಮ, ಶ್ರದ್ಧೆ ಬಹಳ ಮುಖ್ಯ,ಈ ಮಹತ್ತರ ಕಾರ್ಯದಲ್ಲಿ ಅವರ ಜೊತೆ ನಿಲ್ಲುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಎನ್ ರಂಗರಾವ್ ಆಂಡ್ ಸನ್ಸ್ ನಿರ್ದೇಶಕ ಕಿರಣ್ ರಂಗಾ ಅವರು ಮಾತನಾಡಿ ಅರಣ್ಯ ಸಂರಕ್ಷಣೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದ ಅರಣ್ಯ ಸೈನಿಕರನ್ನು ಗುರುತಿಸುವುದು ಗೌರವದ ಕೆಲಸವಾಗಿದೆ ಎಂದು ‌ತಿಳಿಸಿದರು.

ಈ ಸಂದರ್ಭದಲ್ಲಿ ಕ್ರಿಕೆಟ್ ಕೋಚ್ ಜೋಸೆಫ್ ಹೂವರ್ ಕೂಡಾ ಹಾಜರಿದ್ದರು.

Advertisement
Tags :
BangaluruCycle Pure Agarbatti
Advertisement
Next Article