HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಸಿಎಂಗೆ ಮತ್ತೆ ಬಿಗ್ ಶಾಕ್: ಎಫ್ಐಆರ್ ದಾಖಲಿಸಲು ಕೋರ್ಟ್‌ ಆದೇಶ

03:23 PM Sep 25, 2024 IST | ಅಮೃತ ಮೈಸೂರು
featuredImage featuredImage
Advertisement

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯಯ್ಯ ಅವರಿಗೆ ಮತ್ತೆ ಬಿಗ್ ಶಾಕ್ ಉಂಟಾಗಿದೆ.

Advertisement

ಮುಡಾ‌ ಹಗರಣ ಸಂಬಂಧ‌ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ನಿನ್ನೆಯಷ್ಟೇ ಹೈಕೋರ್ಟ್ ತೀರ್ಪು ಸಿದ್ದರಾಮಯ್ಯ ವಿರುದ್ಧ ಬಂದಿತ್ತು,ಈಗ ಜನಪ್ರತಿನಿಧಿಗಳ ನ್ಯಾಲಯದಲ್ಲೂ ವಿರುದ್ಧವೇ ಬಂದಿದ್ದು ಸಿಎಂ ಗೆ ಶಾಕ್ ಮೇಲೆ ಶಾಕ್ ಆಗಿದೆ.

6 ವಾರಗಳಲ್ಲಿ ತನಿಖೆ ನಡೆಸಬೇಕೆಂದು ಮೈಸೂರು ಲೋಕಾಯುಕ್ತ ಎಸ್‌ಪಿಗೆ ಕೋರ್ಟ್‌ ಆದೇಶಿಸಿದ್ದು,ವಿಚಾರಣೆಯನ್ನು ಡಿಸೆಂಬರ್ 24 ಕ್ಕೆ ಮುಂದೂಡಿತು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತ ಪೊಲೀಸರು ಸೆ.26 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲಿದ್ದಾರೆ.

ಮೂರು ತಿಂಗಳೊಳಗೆ‌ ವಿಚಾರಣೆ ನಡೆಸಿ ವರದಿ ನೀಡುವಂತೆಯೂ ಲೋಕಾಯುಕ್ತಕ್ಕೆ ಕೋರ್ಟ್ ಸೂಚಿಸಿದೆ.

Advertisement
Tags :
BangaluruCM Siddaramaiah
Advertisement